Farmers' union leaders met and consoled those who were beaten up by forest department personnel in Kiruvase village of Sagar taluk on Monday.
Fight against the Forest Department is certain.
ಅರಣ್ಯ ಇಲಾಖೆ ವಿರುದ್ಧ ಹೋರಾಟ ನಿಶ್ಚಿತ
ಶಿವಮೊಗ್ಗ (ಸಾಗರ)
ರೈತರ ಸ್ವಾಭಿಮಾನದ ಬದುಕು ಹತ್ತಿಕ್ಕುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ದೌರ್ಜನ್ಯ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ಕರೂರು ಹೋಬಳಿಯ ಕಿರುವಾಸೆ ಗ್ರಾಮದಲ್ಲಿ ಈಚೆಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗಂಭೀರ ಹಲ್ಲೆಗೊಳಗಾದ ಸಂತ್ರಸ್ತ ರೈತರ ನೋವು ಆಲಿಸಿ, ಸಾಂತ್ವನ ಹೇಳಿ ಅವರು ಮಾತನಾಡಿದರು.
ಶರಾವತಿ ಎಡದಂಡೆ ಭಾಗದಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಹೆಚ್ಚುತ್ತಿದೆ. ಅರಣ್ಯ, ವನ್ಯಜೀವಿ ಗಸ್ತು ಪಡೆಯ ಹೆಸರಿನಲ್ಲಿ ಅಮಾಯಕ ರೈತರ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಿಚಾರಣೆ ನೆಪದಲ್ಲಿ ದೌರ್ಜನ್ಯ ನಡೆಸುತ್ತಿರುವ ಕ್ರಮ ಖಂಡನೀಯ, ಘಟನೆ ನೆಡೆದು 15 ದಿನ ಕಳೆದರೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡದೆ ಇರುವುದು ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.
ವನ್ಯಜೀವಿ ಗಸ್ತು ಪಡೆಯು ತಮ್ಮನ್ನು ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬುದನ್ನು ಕುಟುಂಬಕ್ಕೆ ತಿಳಿಸಿಲ್ಲ, ಬಂಧನದ ನಂತರ ಕೆಳ ಹಂತದ ಆರು ಜನ ಸಿಬ್ಬಂದಿಗಳು ಉಕ್ಕಿನ ರಾಡ್ ಬಳಸಿ ಏಕಾಏಕಿ ಮನಸೋ ಇಚ್ಛೆ ಥಳಿಸಿದ್ದು, ಉಸಿರಾಟ ತೊಂದರೆ ಉಂಟಾಗಿದೆ. ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಮಂಜುನಾಥ್ ಆರೋಪಿಸಿದರು.
ಸಂತ್ರಸ್ತ ಮಂಜುನಾಥ್ ಅವರ ತಾಯಿ ಸುಬ್ಬಮ್ಮ ಮಾತನಾಡಿ ಈಗಾಗಲೇ ಎರೆಡು ಭಾರಿ ಶಸ್ತ್ರ ಚಿಕಿತ್ಸೆ ಒಳಗಾಗಿರುವ ಪುತ್ರನ ಮೇಲೆ ಇಲಾಖೆಯ ಸಿಬ್ಬಂದಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ದುಡಿದು ತಿನ್ನುವ ಬಡವರ ಮೇಲೆ ಹೀಗೆ ಹಲ್ಲೆ ನಡೆಸಿದರೆ ನಾವು ಬದುಕುವುದು ಹೇಗೇ ಎಂದು ಪ್ರಶ್ನಿಸಿದರು.
ಮಲೆನಾಡಿನ ಇಂದಿನ ಬಿಕ್ಕಟ್ಟುಗಳಿಗೆ ರೈತರೇ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಬಿಂಬಿಸುವ ಪ್ರಯತ್ನ ನಡೆದಿದೆ. ಕಾಡು, ನಾಡಿನ ಬಿಕ್ಕಟ್ಟಿನ ನಡುವೆ ಅರಣ್ಯ ಇಲಾಖೆಯ ಮನುಷ್ಯ ವಿರೋಧಿ ನಡೆಯನ್ನು ಒಪ್ಪಲಾಗದು, ಇದರ ವಿರುದ್ಧ ಶೀಘ್ರವೇ ಸಂಘಟಿತ ಹೊರಾಟ ನಡೆಸಲಾಗುವುದು ಎಂದು ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ ಟಿ ಹೇಳಿದರು.
ಈ ವೇಳೆ ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಾಮಚಂದ್ರಪ್ಪ, ಗಣೇಶ ಜಾಕಿ, ಹರೀಶ್ ಗಂಟೆ, ಪರಮೇಶ್ವರ ಕರೂರು, ರವಿ ಹುರುಳಿ, ಮಹೇಶ, ಬಾಬು ತುಮರಿ ರೈತ ಸಂಘದ ಸದಸ್ಯರು ಇದ್ದರು.
@smkformedia@gmail.com
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ