ವನ್ಯಜೀವಿ ಗಸ್ತು ಪಡೆ: ಅರಣ್ಯ ಇಲಾಖೆಯ ಮೃಗೀಯ ವರ್ತನೆಗೆ ಖಂಡನೆ.

ಕಾನೂನು ಪಾಲನೆ ಹೆಸರಿನಲ್ಲಿ ಕ್ರೌರ್ಯ. 


ಶಿಕಾರಿ ಆರೋಪ: ಅರಣ್ಯ ಇಲಾಖೆಯ ಮೃಗೀಯ ವರ್ತನೆಗೆ ಖಂಡನೆ. 


ಸುಕುಮಾರ್ ಎಂ. 


ಶಿವಮೊಗ್ಗ:

ಮಲೆನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು  ಹೆಚ್ಚುತ್ತಿರುವುದು ಒಂದಡೆಯಾದರೆ, ಅರಣ್ಯ ಇಲಾಖೆಯ ವನ್ಯ ಜೀವಿ ಗಸ್ತು ಪಡೆಯ ಕೆಳ ಹಂತದ ನೌಕರರು ರೈತರ ಮೇಲೆ ತೋರುತ್ತಿರುವ ಮನುಷ್ಯ ವಿರೋಧಿ ಕ್ರಮವು ರೈತರಿಗೆ ಅರಣ್ಯ ಇಲಾಖೆಯ ಮೇಲೆ ಅಸಹನೆ ಹೆಚ್ಚಳಕ್ಕೆ ಕಾರಣ ವಾಗಿದೆ. 



ಸಾಗರ ತಾಲ್ಲೂಕಿನ ಕಾರ್ಗಲ್ ವನ್ಯಜೀವಿ ವಲಯದ ವನ್ಯಜೀವಿ ಗಸ್ತು ಪಡೆ ಈಚೆಗೆ (ಮೇ31 ರಂದು) ಆಕ್ರಮ ಬೇಟೆ ಪ್ರಯತ್ನ ಹಿನ್ನಲೆಯಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕವಾಗಿ ಮನಸೋ ಇಚ್ಛೆ ತಳಿಸಿರುವುದಕ್ಕೆ ಇಲ್ಲಿನ ಜನಪರ ವೇದಿಕೆ, ಸಮಾನ ಮನಸ್ಕ ವೇದಿಕೆ, ಮಹಿಳಾ ಸಂಘಟನೆಗಳು, ಗ್ರಾಮಸ್ಥರು ಒಕ್ಕೊರಲಿನಿಂದ ಖಂಡಿಸಿವೆ. 


ಘಟನೆ ವಿವರ:

ಶರಾವತಿ ಅಭಯಾರಣ್ಯದಲ್ಲಿ ಮೇ 31ರಂದು ವನ್ಯ ಜೀವಿ ಗಸ್ತು ಪಡೆ ವಳಗೆರೆ ಗ್ರಾಮದಲ್ಲಿ ಲೋಡ್ ಮಾಡಿರುವ ನಾಡ ಬಂದೂಕು ಹಿಡಿದು ಪ್ರಾಣಿ ಬೇಟೆಗೆ ತೆರಳುತ್ತಿದ್ದ ಆರೋಪದಡಿ ಮೂವರಲ್ಲಿ ಕಿರುವಾಸೆ ಗ್ರಾಮದ ಮಂಜುನಾಥ (45) ರಾಮು (35)  ಇಬ್ಬರನ್ನು ಬಂಧಿಸಿತ್ತು. ಈ ವೇಳೆ ಒರ್ವ ಆರೋಪಿ ಆದಿ (30) ತಲೆಮರೆಸಿಕೊಂಡಿದ್ದರು. ಶನಿವಾರ ರಾತ್ರಿ 11:30 ರ ವೇಳೆ ನಡೆದ ಘಟನೆ ನಡೆದಿದೆ. ಬಂಧಿತರ ಬಳಿ ಬೈಕ್, ನಾಡ ಬಂದೂಕು ವಶಕ್ಕೆ ಪಡೆದು ಪ್ರಕರಣ ದಾಖಲಾಗಿ, ಸಾಗರ  ನ್ಯಾಯಾಧೀಶರ ಮುಂದೆ ಡಿಸಿಎಫ್ ಪ್ರಸನ್ನ ಪಟಗಾರು ಹಾಜರು ಪಡಿಸಿದ್ದರು. 


ಬಂಧಿಸುವ ವೇಳೆ ಥಳಿತ: 

ಸ್ನೇಹಿತರ ಮನೆಗೆ ತೆರಳುತ್ತಿದ್ದ ರೈತರನ್ನು ವನ್ಯ ಜೀವಿ ಗಸ್ತು ಪಡೆ ತೀವ್ರವಾಗಿ ಥಳಿಸಿದೆ ಎಂಬುದು ಗ್ರಾಮಸ್ಥರ ಆರೋಪ, ಸತತ 2 ಗಂಟೆಗೂ ಹೆಚ್ಚು ಕಾಲ ಥಳಿಸಿದ್ದರಿಂದ ಒರ್ವ ರೈತನ ಪಕ್ಕೆಲುಬು ಗಂಭೀರ ಹಾನಿಯಾಗಿರುದನ್ನು ವೈದ್ಯಕೀಯ ದಾಖಲೆಗಳು ದೃಡೀಕರಿಸಿದ್ದು, ಇದು ಅಮಾನವೀಯ ಮತ್ತು ಸಂವಿಧಾನದ ಸೆಕ್ಷನ್ 21 ರ ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಿರಿಯ ನ್ಯಾಯವಾದಿ  ತ್ಯಾಗಮೂರ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ಘಟನೆ ನಡೆದ ಪ್ರದೇಶದಿಂದ ಸರ್ಕಾರಿ ಅಸ್ವತ್ರೆಗೆ ಸುಮಾರು 5ಮೈಲುಗಲ್ಲುಗಳ ದೂರವಿದೆ, ಸುಸಜ್ಜಿತ ಆಸ್ಪತ್ರೆಗೆ 47 ಕಿಲೋ ಮೀಟರ್ ಕ್ರಮಿಸಬೇಕಾದ ಸಂದರ್ಭದಲ್ಲಿ 8ಕ್ಕೂ ಹೆಚ್ಚು ಜನ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ದೇಹದ ಸೂಕ್ಷ್ಮ ಅಂಗಗಳ ಮೇಲೆ ಮುಖ, ಎದೆಗೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಥಳಿಸಿರುವುದು ಅತ್ಯಂತ ಕ್ರೌರ್ಯದಿಂದ ಕೊಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು 'ಪ್ರಜಾವಾಣಿ' ಗೆ ತಿಳಿಸಿದ್ದಾರೆ. 


ಕಾರ್ಗಲ್ ವನ್ಯಜೀವಿ ವಲಯ ವಿಭಾಗದ ವ್ಯಾಪ್ತಿಯಲ್ಲಿ 2ವರ್ಷದ ಹಿಂದೆ ರಸ್ತೆಗೆ ಬಾಗಿದ ಮರ ಕಡಿದ ಆರೋಪದ ಮೇಲೆ ರೈತರ ಕೈಗೆ ಸ್ಲೇಟು ಹಿಡಿಸಿದ ಪ್ರಕರಣವು ತೀವ್ರ ಚರ್ಚೆಗೆ ಕಾರಣವಾಗಿತ್ತು. ಶರಾವತಿ ಕಣಿವೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಪಾದಯಾತ್ರೆ ಸಹ ನಡೆದಿತ್ತು. ಈಗ ಪುನಃ ಆಂತಹ ಪ್ರಕರಣ ಶರಾವತಿ ಹಿನ್ನೀರಿನಲ್ಲಿ ನೆಡೆದಿದ್ದು ಇದು ಅರಣ್ಯ ಇಲಾಖೆ ಮತ್ತು ರೈತರ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ.


ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಹೊಸ ಭೂ ಪ್ರದೇಶ ಗಳನ್ನು ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಗೆ ಸೇರಿದ್ದರಿಂದ ಅರಣ್ಯ ಇಲಾಖೆಯ ಕಠಿಣ ನಿಯಮದ ಬಗ್ಗೆ ಜನರಲ್ಲಿ ಅರಿವು ಕೊರತೆ ಇದೆ. ಆದರೆ ಈ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರೈತರ ಮೇಲೆ ಸರ್ಕಾರಿ ಪ್ರಯೋಜಿತ ತಂತ್ರಗಳ ಮೂಲಕ ಗಂಭೀರವಾಗಿ ಥಳಿಸಿರುವುದು 'ಸರ್ಕಾರಿ ಕ್ರೌರ್ಯ'ದ ಭಾಗ ಎಂದು ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ರೈತರಿಗೆ ಥಳಿಸಿದ ಅರಣ್ಯ ಇಲಾಖೆಯ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ರೈತರ ಸ್ವಾಭಿಮಾನದ ಬದುಕು ಹತ್ತಿಕ್ಕುವ ಯತ್ನದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುವ ದೌರ್ಜನ್ಯ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ’ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. 

ಸಮಾಲೋಚನಾ ಸಭೆ ಇಂದು:

ಇಂದು ಬೆಳಿಗ್ಗೆ (ಜೂನ್ 16)ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಕಿರುವಾಸೆ ಗ್ರಾಮದ ಸಂತ್ರಸ್ತ ರೈತರನ್ನು ಭೇಟಿ ಮಾಡಲಿದ್ದಾರೆ. ನಂತರ ಸಭೆ ನೆಡೆಸಿ ಘಟನೆ ಸಂಪೂರ್ಣ ವಿವರವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮಾನವ ಹಕ್ಕು ಆಯೋಗದ ಗಮನಕ್ಕೆ ತಂದು ಮುಂದಿನ ಹೋರಾಟದ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. 


ಅಭಿಪ್ರಾಯ:

ಪ್ರಕರಣದ ಆರೋಪಿಗಳಿಗೆ ಇಲಾಖಾ ಸಿಬ್ಬಂದಿಗಳು ಹಲ್ಲೆ ಮಾಡಿರುವ ಆರೋಪ ನಿರಾಧಾರ.ಅರಣ್ಯ ಸಿಬ್ಬಂದಿ ಯಾವುದೇ ಕಾನೂನು ಬಾಹಿರ ನಡತೆ ಮತ್ತು ಕೃತ್ಯದಲ್ಲಿ ಭಾಗಿಯಾದರೆ ಅಂಥ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 

ಗುರುರಾಜ್, ಸಿಸಿಎಫ್ ಕಾರ್ಗಲ್ 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಸಚಿನ್ ಕುಟುಂಬದ ನೆರವಿಗೆ ಸಹಾಯ ಹಸ್ತ"

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.