"ಸಚಿನ್ ಕುಟುಂಬದ ನೆರವಿಗೆ ಸಹಾಯ ಹಸ್ತ"


ವಿದ್ಯಾರ್ಥಿ ಸಚಿನ್ ಕೆ ಪಿ ಕುಟುಂಬದ ನೆರವಿಗೆ ಆರ್ಥಿಕವಾಗಿ ಜೊತೆ ನಿಲ್ಲೋಣ..
🙏

ನೆರವಿಗೆ ವಾಟ್ಸಾಪ್ ಗುಂಪು ಸೇರಲು:


       ಭೌತಿಕವಾಗಿ ನಮ್ಮೆದುರಿಗಿಲ್ಲ ನಿಜ. ಆದರೆ ಸಂಕಷ್ಟದಲ್ಲಿ ಆತನ ಕುಟುಂಬದ ಜೊತೆ ಅರ್ಥಿಕವಾಗಿ ನಿಲ್ಲಬೇಕಿರುವುದು ಸಹ ಒಂದು ಸಾಮಾಜಿಕ ಜವಾಬ್ದಾರಿಯೇ. ಹೌದು ಈಚೆಗೆ ಆವಿನಹಳ್ಳಿ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಸಚಿನ್ ಕೆ ಪಿ ಕುಟುಂಬವೀಗ ನೋವಿನ ಜೊತೆ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಗ್ರಾಮದ ಯುವಕರ ಸಮಾನ ಮನಸ್ಕ ತಂಡವೊಂದು ವಾಟ್ಸಾಪ್ ಗುಂಪಿನ ಮೂಲಕ ನೆರವಿಗೆ ಮಿಡಿದಿದೆ. 
ಒಂದೆಡೆ ಪುತ್ರನ ಅಗಲುವಿಕೆಯ ನೋವು ಒಂದುಕಡೆಯಾದರೆ, ಕಡುಬಡತನ ಇನ್ನೊಂದು ಕಡೆ, ಕೆಲಸ ಮಾಡಿ ಜೀವನ ಸಾಗಿಸುವ ಪೋಷಕರಿಗೆ ಜೀವನಾಧಾರವಾಗಿದ್ದ ಪುತ್ರ ಮೃತಪಟ್ಟಿರುವುದು ಕುಟುಂಬದ ಸದಸ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮುಂದಿನ ಭವಿಷ್ಯಕ್ಕೆ ದಿಕ್ಕಾಗುವವರು ಯಾರು ಎಂಬುದು ಕುಟುಂಬವನ್ನು ಕಾಡುತ್ತಿರುವ ಚಿಂತೆ. ಹೀಗಾಗಿ ಪೋಷಕರು ಸಹ ನೆರವಿಗೆ ಮನವಿ ಮಾಡಿದ್ದಾರೆ. 

ಸಚಿನ್ ತನ್ನ ಭವಿಷ್ಯದಲ್ಲಿ ಹಲವಾರು ಕನಸುಗಳ ಮೂಟೆಯನ್ನು ಹೊತ್ತಿದ್ದ ನಮ್ಮೂರಿನ ಪ್ರತಿಭಾವಂತ ಯುವಕ ನಮ್ಮನ್ನೆಲ್ಲ ಅಗಲಿರುವುದು ತುಂಬಾ ದುಃಖದ ಸಂಗತಿಆ ಮಗನನ್ನು ನಂಬಿದ ಅವರ ಕುಟುಂಬಕ್ಕೆ ಅಧಾರಾವೇ ಇಲ್ಲದಂತಾಗಿದೆ.

ಈ ನಡುವೆ ಶುಕ್ರವಾರದಿಂದ "ಸಚಿನ್ ಸೇವಾ ನಿಧಿ" ಮೂಲಕ ಆರಂಭಗೊಂಡಿರುವ ಈ ಅಭಿಯಾನಕ್ಕೆ ಸಚಿನ್ ಕಾಲೇಜು ಸ್ನೇಹಿತರು, ಶಾಲಾ ಶಿಕ್ಷಕರು ಸೇರಿದಂತೆ ತಾಲ್ಲೂಕಿನಾದ್ಯಂತ ನೆರವು ಹರಿದು ಬರುತ್ತಿದೆ. ಆದರೆ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಸಹಾಯ ಮಾಡುವ ಮನಸ್ಸುಗಳ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ. 
  "ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ಈ ಬಡ ಕುಟುಂಬಕ್ಕೆ ನೀವು ಮಾಡುವ ಸಹಾಯ ಅವರ ಹಸಿವು ನೀಗಿಸುವಂತಾಗಲಿ.. ಬನ್ನಿ ಕೈಜೋಡಿಸೋಣ....

 ನೆರವು ನೀಡುವವರು ಮೃತ ವಿದ್ಯಾರ್ಥಿ ತಂದೆ ಕೊಲ್ಲಪ್ಪ ಅವರ ಉಳಿತಾಯ ಖಾತೆ ಸಂಖ್ಯೆ: 1949119004970 ಐಎಫ್‌ಎಸ್‌ಸಿ ಕೋಡ್‌: CNRB0001949 ಕೆನರಾ ಬ್ಯಾಂಕ್ ಕೋಗಾರು ಶಾಖೆ ಮೂಲಕ ಅಥವಾ ಪೋನ್ ಪೇ 87627 95560 ಮೂಲಕ ಹಣ ಪಾವತಿಸಬಹುದು ಎಂದು ಸಹೋದರ ರವಿ ಮನವಿ ಮಾಡಿದ್ದಾರೆ. 

              

ಸಚಿನ್ ಸೇವಾ ನಿಧಿ:
ಹೆಸರು : ಗಣಪತಿ (ಸಹೋದರ) 
ಬ್ಯಾಂಕ್ ಖಾತೆ ಸಂಖ್ಯೆ: 1949119004957 
IFSC Code: CNRB0001949
 ಫೋನ್ ಪೇ +91 8277249772


➡️ಸುಕುಮಾರ್ ಎಂ 
 smkformedia@gmail.com


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.